ಲಹರಿ

ಹಿಂಬಾಲಿಸಿ
ಅತ್ತ, ಇತ್ತ ನೀ ತಿರುಗಿದತ್ತ, ಹೊರಳಿದತ್ತ, ಹರಿದತ್ತ
ಆಸೆಬುರುಕ ಕಣ್ಣಲ್ಲಿ
ಹತ್ತು ಹಲವು ಕೋನಗಳಲ್ಲಿ ಚಿತ್ರ ಎತ್ತಿಕೊಳ್ಳುತ್ತ
ಸಂಧಿಗಾಗಿ ಹೊಂಚುತ್ತ
ಬರ ಸೆಳೆಯೆ ಹುನ್ನಾರ ಹೂಡುತ್ತ
ನೆವ ಸವದಲ್ಲಿ ತಾಕುತ್ತ
ಅಲ್ಲಿ ಇಲ್ಲಿ ಮುಟ್ಟುತ್ತ
ನೀನು, ನೋವ ನಟಿಸಿ, ಮುಖ ಕಿವುಚಿ
ಹುಸಿ ಮುನಿಸ ತೋರುತ್ತ, ದೂಕುತ್ತ
ಬೇಕಾಗಿ ತಪ್ಪಿಸಿ ಓಡಾಡುತ್ತ,
ಚಿಟುಗು ಮುಳ್ಳಾಡಿಸಿ ತುಸು ತುಸುವೇ ಕೆರಳಿಸುತ್ತ
ತೊಡರಿದರೆ, ಅಡರಿ ಬಂದರೆ
ಗದರಿಸುವ ಮೋಜು ನೋಡುತ್ತ
ಸುಖದ ಕಾವ ಸವಿಯುತ್ತ, ಹಂಚುತ್ತ
ನಿನ್ನ ಸುತ್ತ ಮುತ್ತ ತಿರುಗುವ ಚಿತ್ರ
ನನಗೆ ಬಲು ಆಪ್ತ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಶೆ-ಭಾಷೆ
Next post ಭಾರತ ದೇಶದ ತೊಂಡು ದನಗಳಿಗೆ

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys